Monday 3 December 2012

ವಿಪರ್ಯಾಸ


"ರಾಮನನ್ನು ಕಾಡಿಗಟ್ಟು
ರಾಜ್ಯವಾಳುವಾಸೆಯಿಟ್ಟು
ಎಂದ ಮಂಥರೆ
ಮಾತುಗಳನ್ನು ನಡೆಸಿದ್ದಕ್ಕೆ
ಭರತ ಖತಿಗೊಂಡು, ಅವಳ ಹೊರಗಟ್ಟಿದ.
ಇಲ್ಲಿ ಮಹಿಳೆಯ ಶೋಷಣೆಯೆಂದು
ಪರವೂರಿನ ಮಹಿಳೆಯರು
ಸೇರಿದ್ದಾರೆ.
ಭರತನಿಗೂ ರಾಜ್ಯವಿಲ್ಲ
ರಾಮ ರಾಜ್ಯದಲ್ಲೇ ಇಲ್ಲ
ಬೆನ್ನುಬಾಗಿದ ಮಂಥರೆಯ ಪ್ರತಿಮೆ
ಇಡಬೇಕೆಂದು ಆಗ್ರಹಿಸಿದ್ದಾರೆ."

No comments:

Post a Comment